08/08/2026

ಭಾರತ್ ಬ್ಯಾಂಕ್ ನ ಕಾರ್ಯಾಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣರಿಗೆ ಬೆಸ್ಟ್ ಚೇರ್ಮನ್ ಅವಾರ್ಡ್

0
Screenshot

Screenshot


ಮಲ್ಟಿ ಸ್ಟೇಟ್ ಸಹಕಾರಿ ಬ್ಯಾಂಕ್ ಗಳಲ್ಲಿ  ಒಂದಾದ ಮುಂಬೈಯ ಪ್ರತಿಷ್ಠಿತ *ಭಾರತ್ ಬ್ಯಾಂಕ್ ನ ಕಾರ್ಯಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣರ ದಕ್ಷ  *ಬೆಸ್ಟ್ ಚೇರ್ಮನ್* ಪ್ರಶಸ್ತಿಯನ್ನು *ಭಾರತ ಸರಕಾರದ ಜನರಲ್ ಮಿನಿಸ್ಟ್ರಿ ಆಫ್ ಕಮ್ಯುನಿಕೇಶನ್ಸ್ ನ ನಿರ್ದೇಶಕ ಶ್ರೀ ಸುಮ್ನೆಶ್ ಜೋಶಿರವರು* ಇಂದು ಮುಂಬಯಿ ನ ಲಲಿತ್ ಗ್ರಾಂಡ್ ಹೋಟೆಲ್ ನ ಸಭಾಗೃಹದಲ್ಲಿ ನಡೆದ ಕೋ ಆಪರೇಟಿವ್ ಬ್ಯಾಂಕ್ ನ ಸಭೆಯಲ್ಲಿ ಹಸ್ತಾಂತರಿಸಿದರು. ಸೂರ್ಯಕಾಂತ್ ಬ್ಯಾಂಕಿನ ಜವಾಬ್ದಾರಿಯನ್ನು ದಕ್ಷತೆಯಿಂದ ನಿರ್ವಹಿಸಿದ ಫಲವಾಗಿ ಅಧಿಕಾರದ ಚುಕ್ಕಾಣಿಯನ್ನು ಹಿಡಿದ ಏಳು ತಿಂಗಳಲ್ಲಿಯೇ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ಭಾರತ್ ಬ್ಯಾಂಕ್ ನ ಜತೆ *ಆಡಳಿತ ನಿರ್ದೇಶಕ  ದಿನೇಶ್ ಬಿ ಸಾಲ್ಯಾನ್,  ಭಾಸ್ಕರ್ ರಾವ್(ಸಿಐಎಸ್ಒ), ಬ್ಯಾಂಕ್ ನ ಮಾರ್ಕೆಟಿಂಗ್ ಮ್ಯಾನೇಜರ್ ಶ್ರೀ ರೋಹಿತ್ ಉದ್ಯಾವರ್* ಉಪಸ್ಥಿತರಿದ್ದರು. ಭಾರತ್ ಬ್ಯಾಂಕ್ ನಿರಂತರವಾಗಿ ಪ್ರಶಸ್ತಿಗಳನ್ನು  ಪಡೆಯಲು, *ಆಡಳಿತವರ್ಗ, ನಿರ್ದೇಶಕ ಮಂಡಳಿ ಮತ್ತು ಸಿಬ್ಬಂದಿವರ್ಗದವರ* ಅನವರತ ಪರಿಶ್ರಮದಿಂದ ಸಾಧ್ಯವಾಗಿದೆ. ಎಲ್ಲರಿಗೂ  ಅಭಿನಂದನೆಗಳು.


Leave a Reply

Your email address will not be published. Required fields are marked *

You may have missed