08/08/2026

ರತ್ನಾಕರ್ ಹೆಬ್ಬಾರ್ ಆರೋಗ್ಯ ವಿಚಾರಿಸಲು ಯುವ ಉದ್ಯಮಿ ಗೋವಿಂದ ಬಾಬು ಪೂಜಾರಿ ಭೇಟಿ

0

ಬೈಂದೂರು : ಇಂದು ಶ್ರೀ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ಉಪ್ಪುಂದ ಇದರ ಮಾಲೀಕರಾದ ಯುವ ಉದ್ಯಮಿ ಅನ್ನದಾತ. ಆಶ್ರಯದಾತ. ಬಡವರ ಪಾಲಿನ ಆಪದ್ಬಾಂಧವ ಗೋವಿಂದ ಬಾಬು ಪೂಜಾರಿ ಅವರು ಗುಜ್ಜಾಡಿ ಗ್ರಾಮದ ನಾಯಕವಾಡಿ ಮಂಕಿವಯೋವೃದ್ಧರು ಕ್ಯಾನ್ಸರ್ ಪೀಡಿತರು ಮಕ್ಕಳ ಭಾಗ್ಯವು ಇಲ್ಲದ ವ್ರದ್ದ ದಂಪತಿಗಳು ಬಾಡಿಗೆ ಮನೆಯಲ್ಲಿ ವಾಸವಾಗಿರುದ್ದರು.

ಹೌದು ಮನೆ ಇದ್ದು ಇಲ್ಲದಂತೆ ಇರುವ ರತ್ನಾಕರ ಹೆಬ್ಬಾರ್ ದಂಪತಿಗಳು ಇವರ ಕಷ್ಟದ ಪರಿಸ್ಥಿತಿ ನೋಡಿ ಮನೆ ಮಾಲೀಕರುದೇವರಾಯ ಸೇರುಗಾರ್ ಹಲವು ತಿಂಗಳಿಂದ ದಂಪತಿಗಳಿಂದ ಬಾಡಿಗೆಯು ಪಡೆಯುತ್ತಿಲ್ಲ ಎಂದು ರತ್ನಾಕರ ಹೆಬ್ಬಾರ್ ಹೆಂಡತಿರಾಣಿ ಗೋವಿಂದ ಬಾಬು ಪೂಜಾರಿಯವರ ಎದುರು ಕಣ್ಣೀರು ಹಾಕಿದರು .

ಗೋವಿಂದ ಬಾಬು ಪೂಜಾರಿಯವರು ರತ್ನಾಕರ್ ಹೆಬ್ಬಾರರ ಆರೋಗ್ಯ ವಿಚಾರಿಸಿ ಸ್ಥಳದಲ್ಲಿ ಧನ ಸಹಾಯ ಮಾಡಿ ಮಾನವೀಯತೆಮೆರೆದರು. ಇನ್ನೂ ಮುಂದೆ ಏನಾದರೂ ನನ್ನಿಂದ ಸಹಾಯ ಬೇಕಾದರೆ ಮಾಡುತ್ತೇನೆಂದು ಹೇಳಿದರು.


Leave a Reply

Your email address will not be published. Required fields are marked *

You may have missed