08/08/2026

ಕುದ್ರೋಳಿ ಗುರುಬೆಳದಿಂಗಳು ಫೌಂಡೇಶನ್ ಅಬ್ಬಕ್ಕ ಸಾಲು ಮರ ಯೋಜನೆ, ಬಡವರ ಸೇವೆ ಜತೆಗೆ ಪರಿಸರ ಕಾಳಜಿ

0

 

 

ಮಂಗಳೂರು: ಪರಿಸರ ಜಾಗೃತಿ, ಸ್ವಚ್ಛತೆ ಕಾರ್ಯಕ್ರಮ ಇಂದಿನ ಅಗತ್ಯ. ಬಡವರ ಸೇವೆ ಜತೆಗೆ ಪರಿಸರ ಕಾಳಜಿ ಮೂಡಿಸುತ್ತಿರುವ ಗುರುಬೆಳದಿಂಗಳು ಫೌಂಡೇಶನ್ ಕಾರ್ಯ ಶ್ಲಾಘನೀಯ ಎಂದು ಉಳ್ಳಾಲ ಶಾಸಕ ಯು.ಟಿ.ಖಾದರ್ ಹೇಳಿದರು.

ಗುರುಬೆಳದಿಂಗಳು ಫೌಂಡೇಶನ್ ಕುದ್ರೋಳಿ ವತಿಯಿಂದ ಮಂಗಳೂರು ವಲಯ ಅರಣ್ಯ ಇಲಾಖೆ, ಪರಿಸರ ಪ್ರೇಮಿ ಮಾಧವ ಉಳ್ಳಾಲ್ ಅವರ ಸಹಕಾರದಲ್ಲಿ ಉಳ್ಳಾಲ ಅಬ್ಬಕ್ಕನ ಪ್ರತಿಮೆಯಿಂದ ಉಳ್ಳಾಲಬೈಲ್ ಪ್ರದೇಶದವರೆಗೆ ‘ಅಬ್ಬಕ್ಕ ಸಾಲುಮರ ಯೋಜನೆ’ ಅಂಗವಾಗಿ ಗಿಡ ನಾಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಉಳ್ಳಾಲ ಕ್ಷೇತ್ರ ಎಲ್ಲ ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿ ಸಾಲು ಮರ ಅಭಿವೃದ್ಧಿಪಡಿಸುವ ಯೋಜನೆ ರೂಪಿಸುವ ಮೂಲಕ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಒತ್ತು ನೀಡಲಾಗುವುದು ಎಂದರು.

 

ಉಳ್ಳಾಲ ಸಯ್ಯದ್ ಮದನಿ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಮಾತನಾಡಿ, ಗುರುಬೆಳದಿಂಗಳು ಸಂಸ್ಥೆ ಶಾಂತಿ ಮತ್ತು ಸೌಹಾರ್ದತೆಯ ಕೊಂಡಿಯಾಗಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ಗುರುಬೆಳದಿಂಗಳು ಫೌಂಡೇಶನ್ ಅಧ್ಯಕ್ಷ ಪದ್ಮರಾಜ್ ಆರ್. ಅಧ್ಯಕ್ಷತೆ ವಹಿಸಿದ್ದರು. ವಲಯ ಅರಣ್ಯ ಇಲಾಖಾ ಅಧಿಕಾರಿ ಮಹಾಬಲ, ಅರಣ್ಯ ರಕ್ಷಕಿ ಸೌಮ್ಯಾ, ಉಳ್ಳಾಲ ನಗರಸಭೆ ಪೌರಾಯುಕ್ತೆ ವಿದ್ಯಾ, ಅಧ್ಯಕ್ಷೆ ಚಿತ್ರಕಲಾ ಚಂದ್ರಕಾಂತ್, ಉದ್ಯಮಿಗಳಾದ ಧರ್ಮರಾಜ್ ಅಮ್ಮುಂಜೆ, ಸತೀಶ್ ಕುಮಾರ್ ಬಜಾಲ್, ಯುವವಾಹಿನಿ ಕೊಲ್ಯ ಘಟಕ ಅಧ್ಯಕ್ಷ ಮೋಹನ್ ಮಾಡೂರು, ಕಣಚೂರು ಮೆಡಿಕಲ್ ಕಾಲೇಜು ಲೆಕ್ಕಪರಿಶೋಧಕ ಯು.ಎ.ಪ್ರೇಮನಾಥ್, ಸಾಮಾಜಿಕ ಕಾರ್ಯಕರ್ತ ಉದಯ ಆರ್.ಕೆ, ಉಳ್ಳಾಲ ಮೊಗವೀರ ಸಂಘ ಅಧ್ಯಕ್ಷ ಮನೋಜ್ ಸಾಲ್ಯಾನ್, ಹೈಕೋರ್ಟ್ ವಕೀಲೆ ರಾಜಲಕ್ಷ್ಮೀ ಸುವರ್ಣ, ಮಂಗಳೂರು ಮಹಾನಗರ ಪಾಲಿಕೆ ಸದಸ್ಯ ಅನಿಲ್ ಪೂಜಾರಿ, ಮಂಗಳೂರು ವಿಶ್ವವಿದ್ಯಾಲಯ ನಾರಾಯಣಗುರು ಅಧ್ಯಯನ‌ ಪೀಠ ಸದಸ್ಯೆ ನಮಿತಾ ಶ್ಯಾಮ್, ಬಿಲ್ಲವ ಸಂಘ ಬಂಡಿಕೊಟ್ಯ ಅಧ್ಯಕ್ಷ ಪ್ರಶಾಂತ್, ಕಾರ್ಯದರ್ಶಿ ಮಮತಾ, ಕೊಲ್ಯ ಬಿಲ್ಲವ ಸಂಘದ ಟ್ರಸ್ಟ್ ಅಧ್ಯಕ್ಷ ವೇಣುಗೊಪಾಲ್, ಕಾರ್ಯದರ್ಶಿ ಭಾಸ್ಕರ್ ಮಡ್ಯಾರ್ , ಧರ್ಮಸ್ಥಳ ಗ್ರಾಮಾಭಿವೃದ್ಧಿ ಉಳ್ಳಾಲ ಘಟಕ ಯೋಜನಾಧಿಕಾರಿ ಜಯಂತಿ, ಲೋಹಿತ್, ವಿವಿಧ ಸಂಸ್ಥೆಗಳ ಸದಸ್ಯರು ಇದ್ದರು. ಕುಸುಮಾಕರ್ ಕುಂಪಲ ಕಾರ್ಯಕ್ರಮ‌ ನಿರೂಪಿಸಿದರು. ಗುರು ಬೆಳದಿಂಗಳು ಫೌಂಡೇಶನ್ ಪ್ರಧಾನ‌ ಕಾರ್ಯದರ್ಶಿ ರಾಜೇಶ್ ಸುವರ್ಣ ವಂದಿಸಿದರು.


Leave a Reply

Your email address will not be published. Required fields are marked *