08/08/2026

ಕಲ್ಲಡ್ಕ ಶ್ರೀ ಶಾರದಾ ಪೂಜಾ ಮಹೋತ್ಸವ ಸಮಿತಿ ಅಧ್ಯಕ್ಷರಾಗಿ ಯೋಗೀಶ್ ಪೂಜಾರಿ ಆಯ್ಕೆ

0

ಬಂಟ್ವಾಳ: ಶ್ರೀ ಶಾರದಾ ಸೇವಾ ಪ್ರತಿಷ್ಠಾನ (ರಿ) ಕಲ್ಲಡ್ಕ ಆಶ್ರಯದಲ್ಲಿ ನಡೆಯುವ 44ನೇ ವರ್ಷದ ಶಾರದಾ ಪೂಜಾ ಮಹೋತ್ಸವದ ಮಹಾಸಭೆ ಪ್ರತಿಷ್ಠಾನದ ಅಧ್ಯಕ್ಷ ನರಸಿಂಹ ಮಡಿವಾಳ ಅಧ್ಯಕ್ಷತೆಯಲ್ಲಿ ನಡೆದಿದ್ದು, ಉತ್ಸವ ಸಮಿತಿಯ ನೂತನ ಅಧ್ಯಕ್ಷರಾಗಿ ಯೋಗೀಶ್ ಪೂಜಾರಿ ಸರ್ವಾನುಮತದಿಂದ ಆಯ್ಕೆಗೊಂಡಿದ್ದಾರೆ.
ಉಪಾಧ್ಯಕ್ಷರಾಗಿ ರಾಜೇಶ್ ಆಚಾರ್ಯ ಕೊಳಕೀರು, ಸೌಮ್ಯ ಶಶಿಕಿರಣ್ ಆಚಾರ್ಯ ರಾಮನಗರ, ಪ್ರಧಾನ ಕಾರ್ಯದರ್ಶಿಯಾಗಿ ಪ್ರಮಿತ ಶೆಟ್ಟಿ ಕುಕ್ಕಮಜಲು, ಜತೆಕಾರ್ಯದರ್ಶಿಯಾಗಿ ವಿಕ್ರಮ್ ಪ್ರಭು ರಾಮನಗರ, ಚೇತನ್ ಪಳನೀರು, ಕೋಶಾಧಿಕಾರಿಯಾಗಿ ಗಣೇಶ್ ಶೆಟ್ಟಿ ಕುಕ್ಕಮಜಲು, ಜತೆಕಾರ್ಯದರ್ಶಿಯಾಗಿ ಶಿವರಾಮ ಕುಕ್ಕಮಜಲು, ಕ್ರೀಡಾಕಾರ್ಯದರ್ಶಿಯಾಗಿ ಪ್ರಶಾಂತ್ ಆಳ್ವ ಕೊಳಕೀರು, ಯಮುನಾ ಟೀಚರ್, ಗಣೇಶ್ ಮಜಲು, ಹರೀಶ್ ಕುಕ್ಕಮಜಲು, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ವಿದ್ಯಾ ಗುಣಕರ ಕೊಟ್ಟಾರಿ ಕೊಳಕೀರು, ಜಯಶಂಕರ ಶೆಟ್ಟಿ ಕುಕ್ಕಮಜಲು, ಶಂಕರ ಕುಕ್ಕಮಜಲು, ಕೀರ್ತನ್ ಕುಕ್ಕಮಜಲು, ಸಂಘಟನಾ ಕಾರ್ಯದರ್ಶಿಯಾಗಿ ಶಶಿಕಿರಣ್ ಆಚಾರ್ಯ ರಾಮನಗರ, ಸಂಚಾಲಕರಾಗಿ ವಜ್ರನಾಥ ಮಡ್ಲಮಜಲು ಅವರನ್ನು ಸರ್ವಾನುಮತದಿಂದ ಆರಿಸಲಾಯಿತು. ಸಭೆಯಲ್ಲಿ ಪ್ರತಿಷ್ಠಾನದ ಕಾರ್ಯದರ್ಶಿ ಚಿ.ರಮೇಶ್, ಟ್ರಸ್ಟಿಗಳು, ಸರ್ವಸದಸ್ಯರು ಉಪಸ್ಥಿತರಿದ್ದರು.


Leave a Reply

Your email address will not be published. Required fields are marked *

You may have missed