08/08/2026

ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಅವರನ್ನು ಭೇಟಿಯಾದ ಕನ್ನಡ ‌ಸಂಘದ ಬೈಹರೀನ್ ಅಧ್ಯಕ್ಷರಾದ ಅಜಿತ್ ಬಂಗೇರ

0
Screenshot

Screenshot


ಕನ್ನಡ ‌ಸಂಘದ ಅಧ್ಯಕ್ಷರಾದ  ಅಜಿತ್ ಬಂಗೇರ ಅವರು  ಜೂನ್ 18,2025  ರಂದು, ಬೆಂಗಳೂರಿನಲ್ಲಿ, ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಅವರನ್ನು ಭೇಟಿಯಾಗಿ ,ಮಾತುಕತೆ ನಡೆಸಿದರು.

ಈ ವೇಳೆ, ಕನ್ನಡ ಭವನದಲ್ಲಿ  ನಡೆಸುತ್ತಿರುವ ವಿವಿಧ ಕನ್ನಡಪರ ಚಟುವಟಿಕೆಗಳು  ಹಾಗೂ ಅಲ್ಲಿನ ಕನ್ನಡಿಗರಿಗೆ ಸಾಂಸ್ಕೃತಿಕ ಹಾಗೂ ಸಾಮಾಜಿಕ ಬಲವನ್ನು ನೀಡುವ ಸಂಘದ ಧ್ಯೇಯೋದ್ದೇಶಗಳನ್ನು   ಪ್ರಸ್ತುತಪಡಿಸಿದರು.

ಡಾ. ಆರತಿ ಕೃಷ್ಣ ಅವರು ಈ ಸಂದರ್ಭದಲ್ಲಿ ಮಾತನಾಡಿ, ಕನ್ನಡ ಸಂಘ ಬಹರೈನ್ ಹಮ್ಮಿಕೊಂಡಿರುವ ಮುಂದಿನ ಎಲ್ಲಾ ಕಾರ್ಯಚಟುವಟಿಕೆಗಳಿಗೆ, ವಿಶೇಷವಾಗಿ ಕನ್ನಡ ಭವನದ  ಸೌಕರ್ಯಗಳ ಅಭಿವೃದ್ಧಿ ಯೋಜನೆಗೆ ಹಾಗೂ ಅನಿವಾಸಿ ಕನ್ನಡಿಗರ ಹಿತಾಸಕ್ತಿಗೆ ತನ್ನ ಪೂರ್ಣ ಬೆಂಬಲವನ್ನು ನೀಡುವುದಾಗಿ ಭರವಸೆ ನೀಡಿದರು.


Leave a Reply

Your email address will not be published. Required fields are marked *