08/08/2026

ಯುವವಾಹಿನಿಯ ಸಮಾಜಮುಖಿ ಕಾರ್ಯಕ್ರಮಗಳಿಗೆ ವಿಧಾನಸಭಾ ಕ್ಷೇತ್ರದ ಶಾಸಕ ಯು.ಟಿ.ಖಾದರ್ ಶ್ಲಾಘನೆ

0

ಕತೆ, ಕಾದಂಬರಿಗಾರ, ನಟ ನಿರ್ದೇಶಕ, ಪತ್ರಕರ್ತ ಹಾಗೂ ರಾಜಕಾರಣಿ ಹೀಗೆ ತನ್ನ ಐದು ದಶಕಗಳ ಯಶೋಗಾಥೆಯ ಬದುಕಿನಲ್ಲಿ ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಈ ನಾಡು ಕಂಡ, ಕರಾವಳಿಯ ಶ್ರೇಷ್ಠ ಸಾಹಿತಿ ವಿಶುಕುಮಾರ್ ರವರ ಸ್ಮರಣಾರ್ಥ ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭವು ಬ್ರಹ್ಮಶ್ರೀ ನಾರಾಯಣಗುರು ಮಂದಿರ ಕೊಲ್ಯ ಸೋಮೇಶ್ವರದಲ್ಲಿ ಜರುಗಿತು.

ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಶ್ರೀ ಯು.ಟಿ.ಖಾದರ್ ರವರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದಿರುವ ಯುವವಾಹಿನಿಯ ಸಮಾಜಮುಖಿ ಕಾರ್ಯಕ್ರಮಗಳು, ಶಿಕ್ಷಣ, ಸಾಹಿತ್ಯ, ಔದ್ಯೋಗಿಕ ಕ್ಷೇತ್ರದಲ್ಲಿ ಯುವಪೀಳಿಗೆಗಳ ಅಭ್ಯುದಯಕ್ಕೆ ಮಾದರಿ ಎಂದು ಶ್ಲಾಘಿಸಿದರು.


Leave a Reply

Your email address will not be published. Required fields are marked *

You may have missed