TOP STORIES:

ಹೆಣ್ಣು ಕೂಡ ಒಂದು ಜೀವಿ ಎಂಬುವುದನ್ನು ಇಂದಿನ ಸಮಾಜ ಮರೆತಿದೆಯೇ ?


ಹೆಣ್ಣು
“ಯತ್ರ ನಾರ್ಯಸ್ತು ಪೂಜೆಯಂತೇ ತತ್ರ ದೇವತಾ”: ಅಂದರೆ “ಎಲ್ಲಿ ಹೆಣ್ಣನ್ನು ಪೂಜೆಸುತ್ತಾರೋ ಅಲ್ಲಿ ಸಕಲ ದೇವತೆಗಳು ನೆಲೆಸುತ್ತಾರೆ” ಆದರೆ ಬೇಸರದ ಸಂಗತಿಯೆಂದರೆ ಈ ೨೧ನೆಯ ಶತಮಾನದಲ್ಲಿ ಈ ಅರ್ಥ ಅಕ್ಷರಶ: ಸುಳ್ಳುಯೆನಿಸುತ್ತಿದೆ.

ಹೆಣ್ಣನ್ನು ಪೂಜೆಮಾಡುವುದು ಬೇಡ ಕನಿಷ್ಟ ಪಕ್ಷ ಅವಳು ಒಂದು ಜೀವಿ ,ಅವಳಿಗೂ ಈ ಭೂಮಿಯಲ್ಲಿ ಅವಳ ಇಚ್ಛೆಯಂತೇ ಬದುಕಲು ಬಿಟ್ಟರೆ ಸಾಕು..

‘ಹೆಣ್ಣು ‘ಒಬ್ಬಳು ಗಂಡಿನಂತೆ ಒಂದು ಜೀವಿ ,ಅವಳಿಗೂ ಮನಸ್ಸು ,ಭಾವನೆಗಳಿವೆ,ಅವಳು ಕೇವಲ ಉಸಿರಾಡುವ ಬೊಂಬೆಯಲ್ಲ ,ಅವಳಿಗೂ ಗಂಡಿನಂತೆ ಜೀವವಿದೆ . ಇದೆನ್ನೆಲ್ಲ ಮರೆತಂತಿದೆ ಗಂಡುಕುಲ . ‘ಹೆಣ್ಣು ‘ಅಂದರೆ ಕೇವಲ ನಿಮ್ಮ ಕಾಮದ ಬಯಕೆಗಳನ್ನ ತೀರಿಸುವ ಒಂದು ಯಂತ್ರವಾಗಿ ಕಾಣುತ್ತಾಳ ? ಮತ್ತೇಕೆ..ಅವಳ ಮೇಲಿನ ದೌರ್ಜನ್ಯ ,ಅತ್ಯಾಚಾರ, ಹಿಂಸೆ ಇನ್ನು ನಿಂತಿಲ್ಲ ..ಹೆಣ್ಣನ್ನು ಅಪಹರಿಸಿದಕ್ಕೆ ,ಹೆಣ್ಣಿನ ಮಾನಭಂಗ ಮಾಡಿದ್ದಕ್ಕೆ ರಾಮಾಯಣ ,ಮಹಾಭಾರತ ಎನ್ನುವ ಮಹಾಸಂಗ್ರಾಮವೇ ನಡೆದುಹೋಯಿತು. ಆದರೆ ಇಂದು ಹೆಣ್ಣಿನ ಮೇಲೆ ಅದೆಷ್ಟೋ ದೌರ್ಜನ್ಯ, ಅತ್ಯಾಚಾರಗಳು ನಡಿದಿದೆ ನಡೆಯುತ್ತಿದೆ . ಯಾಕಂದ್ರೆ ಅವಳು ‘ಹೆಣ್ಣು’ ಎನ್ನುವ ಕಾರಣವೆ??

   (Copyrights owned by: billavawarriors.com )

ಒಂದೇ ರಾತ್ರಿಯಲ್ಲಿ ನೋಟ್ ಬ್ಯಾನ್ ಆಗುತ್ತೆ , ಒಂದೇ ರಾತ್ರಿಯಲ್ಲಿ ಸರಕಾರ ಬದಲಾಗುತ್ತೆ ,ಒಂದೇ ದಿನದಲ್ಲಿ ಎಲ್ಲ ಚೈನೀಸ್ ಆಪ್ ಟಿವಿ ಚಾನೆಲ್ ಬ್ಯಾನ್ ಆಗುತ್ತೆ ,ಆದರೆ ಯಾಕೆ ??ವ್ಯಾಘ್ರ ಕಾಮುಕರಿಗೆ ಶಿಕ್ಷೆ ಆಗುದಿಲ್ಲ. ಯಾಕಂದ್ರೆ ಒಂದೇ ಉತ್ತರ ಅವಳು ‘ಹೆಣ್ಣು’ ಅಲ್ಲವೇ.?

ಇಂದು ಮನುಷ್ಯ ಕಾಲಿಡದ ಕ್ಷೇತ್ರವಿಲ್ಲ . ಭೂಮಿಯಲ್ಲಿ ಮಾತ್ರವಲ್ಲದೆ ಹೊಸಜಗತ್ತನ್ನು ಹುಡುಕುತ್ತ ಆಕಾಶಕ್ಕೆ ಹಾರಿದ್ದಾನೆ . ಹಲವಾರು ಅಮೋಘ ಸಾಧನೆ ಮಾಡಿದ್ದಾನೆ. ಆದರೆ ಹೆಣ್ಣಿನ ಮೇಲಿನ ಅತ್ಯಾಚಾರಗಳು ನಡೆಯುತ್ತಲೇ ಇದೆ ಕಾರಣ ಅವಳು ‘ಹೆಣ್ಣು’…

ಗಂಡುಜಾತಿಯ ರಣಹೇಡಿಗಳೇ, ವ್ಯಾಘ್ರಕಾಮುಕರೇ ..ಯಾಕೆ ನಿಮಗೆ ಇನ್ನು ಅರ್ಥವಾಗುತ್ತಿಲ್ಲ ನಿಮಗೆ ಪ್ರೀತಿ ಕೊಟ್ಟು ನಿಮ್ಮನ್ನು ಒಂಭತ್ತು ತಿಂಗಳು ಸಾಕಿ ಸಲುಹಿದ ಆ ನಿಮ್ಮ ತಾಯಿಯು ಒಬ್ಬಳು ಹೆಣ್ಣಲ್ಲವೇ . ಅವಳು (ಹೆಣ್ಣು ) ಹುಟ್ಟುವಾಗ ಅಣ್ಣ- ತಮ್ಮ ಎನ್ನುವ ಪಟ್ಟಕಟ್ಟಿ ನಿಮಗೆ ಪ್ರೀತಿ ,ಸಂತೋಷ ನೀಡುವ ಅಕ್ಕ -ತಂಗಿ ಸ್ವರೂಪವಲ್ಲವೇ ಹೆಣ್ಣು ..

ಕೊನೆ ಪಕ್ಷ ನಿಮಗೆ ಹೆಣ್ಣಿಗೆ ತಾಯಿ ,ಅಕ್ಕ ,ತಂಗಿ ಸ್ಥಾನ ನೀಡಲು ಕಷ್ಟವಾದರೇ ಬಿಡಿ..ಕನಿಷ್ಟ ಪಕ್ಷ ಅವಳು ನಿಮ್ಮಂತೆಹೇ ಮನುಷ್ಯಳು ಅವಳಿಗೂ ಒಂದು ಜೀವವಿದೆ, ಜೀವನವಿದೆ..ಸಾವಿರಾರು ಬಣ್ಣ- ಬಣ್ಣದ ಕನಸುಗಳಿವೆ ,ಆ ಕನಸುಗಳಿಗೆ ಬಣ್ಣ ಹಚ್ಚುವ ಕೆಲಸಮಾಡದಿದ್ದರು ಪರವಾಗಿಲ್ಲ ಅವಳ ರೆಕ್ಕೆ ಕತ್ತರಿಸುವ ಕೆಲಸಮಾಡದಿರು ಮನುಜ…

ಒಮ್ಮೆ ಮನುಜನಾಗು ..ಹೆಣ್ಣನ್ನು ಕೆಟ್ಟ ದ್ರಷ್ಟಿಯಿಂದ ನೋಡುವುದನ್ನು ನಿಲ್ಲಿಸು ..ಈ ಮನುಷ್ಯ ಜನುಮದಲ್ಲಿ ಮಾನವನಾಗಿ ಬಾಳು .

“ನಮ್ಮ ರಾಷ್ಟ್ರಪಿತ ಮಹಾತ್ಮಾ ಗಾಂಧಿ “ಈ ರೀತಿ ಹೇಳಿದ್ದಾರೆ “ಮಧ್ಯರಾತ್ರಿ ೧೨ಗಂಟೆಗೆ ಹೆಣ್ಣು ಹೊರಗಡೆ ಹೋಗಿ ಮನೆಗೆ ಸುರಕ್ಷಿತವಾಗಿ ಹಿಂತಿರುಗಿ ಬಂದರೆ ಆ ದಿನ ನಮಗೆ ಸ್ವಾತಂತ್ರಾ ಸಿಕ್ಕಿದೆ ಎಂದರ್ಥ”.ಒಮ್ಮೆ ಈ ಪ್ರಶ್ನೆಯನ್ನು ಮನದಲ್ಲಿ ಕೇಳಿ ನೋಡಿ ಉತ್ತರ ಪ್ರಶ್ನೆಯಾಗಿಯೇ ಉಳಿದುಬಿಡುತ್ತೆ
ಅಲ್ಲವೇ.. ಸಾಧ್ಯವಾದರೆ ಮಾತ್ರ ಮಾತ್ರ .. ಹೆಣ್ಣಿಗೆ ನಿಮ್ಮ ಬೆಂಬಲ ಸಹಾಯ ನೀಡಿ ಅದು ಬಿಟ್ಟು ಅವಳ ಮಾನಹರಣ ಮಾಡದಿರಿ ಅವಳ ಮೇಲಿನ ಅತ್ಯಾಚಾರ ನಿಲ್ಲುವ ನಿಟ್ಟಿಗೆ ಒಂದು ಪ್ರಯತ್ನ ಮಾಡಿ..ಅದು ಬಿಟ್ಟು ಅವಳ ದೌರ್ಜನ್ಯ ಮಾಡದಿರು, ಇಲ್ಲದಿದ್ದರೆ ಕೇಳು ಮನುಜ ಕಾಲ ಪಾಠ ಕಲಿಸಲು ಒಂದೊಂದು ಹೆಜ್ಜೆ ಮುಂದೆ ಇಟ್ಟಿದೆ ಪ್ರವಾಹ ,ಕರೋನ ಭೂಕಂಪ, ಪ್ರಕೃತಿ ವಿಕೋಪಗಳಿಂದ ಪಾಠ ಕಲಿಯದೇ ನೀ ಗೆದ್ದೇ ಎಂದು ಬೀಗಬೇಡ
ಮನುಜ…ಬೀಗಬೇಡ..ಕಾಲದಯೆದುರು ನೀ ತೃಣ ಸಮಾನವೆಂದು ನೆನಪಿಟ್ಟುಕೋ. ಇನ್ನಾದರೂ ಎಚ್ಚೆತ್ತಿಕೊ ಇಲ್ಲವಾದ್ರೆ ಕಾಲದ ಉಗ್ರರೂಪವ ಸಹಿಸುವ ಶಕ್ತಿ ನಿನ್ನಲ್ಲಿ ಇನ್ನು ಉಳಿದಿಲ್ಲ ಮನುಜ …ನೀ ಬದಲಾಗು ..ನೀ ಮನುಷ್ಯನಾಗಿ ಬದಲಾಗು..ಇನ್ನು ಬದಲಾಗದಿದ್ದರೆ ಕಾಲದ ಎದುರು ಸುಟ್ಟು ಭಸ್ಮವಾಗಿಬಿಡುತ್ತೀಯ.ಕಾಲ ತನ್ನ ಉಗ್ರರೂಪ ತೋರಿಸುವ ಸಮಯ ಬಹಳ ಹತ್ತಿರದಲ್ಲಿದೆ .

ರಮ್ಯಾ ಸಾಲಿಯಾನ್
ಬೋರುಗುಡ್ಡೆ, ಮೂಡಬಿದ್ರೆ

   (Copyrights owned by: billavawarriors.com )


Related Posts

ರಾಜ್ಯದಲ್ಲಿ ರಚನೆಯಾಗಲಿರುವ ನೂತನ ಸಚಿವ ಸಂಪುಟ ಸಚಿವ ಸಂಪುಟದಲ್ಲಿ ಬಿಲ್ಲವ ಸಮಾಜಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಬೇಕು


Share         ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಅವರಿಗೆ ಸಚಿವ ಸ್ಥಾನ ನೀಡಬೇಕು ಬಿಲ್ಲವ ಸಮಾಜಕ್ಕೆ ನ್ಯಾಯಯುತ ಪ್ರಾತಿನಿಧ್ಯ ಒದಗಿಸಬೇಕು ಸೋಲೂರು ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಆಗ್ರಹ ರಾಜ್ಯದಲ್ಲಿ ರಚನೆಯಾಗಲಿರುವ


Read More »

ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ಅಶೋಕ್ ಪೂಜಾರಿ ಪುನಾರಾಯ್ಕೆ


Share         ಕುಂದಾಪುರ, ಮೇ 24: ಬಿಲ್ಲವ ಸಮಾಜ ಸೇವಾ ಸಂಘ ಕುಂದಾಪುರ ಇದರ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ರವಿವಾರ ಶ್ರೀ ನಾರಾಯಣ ಗುರು ಕಲ್ಯಾಣ ಮಂಟಪದಲ್ಲಿ ಜರಗಿತು. ಕುಂದಾಪುರ ಬಿಲ್ಲವ ಸಮಾಜ ಸೇವಾ


Read More »

ನಿಸ್ವಾರ್ಥ ಸೇವೆ ಸಲ್ಲಿಸಿ “ಜನಸ್ನೇಹಿ ಪೊಲೀಸ್” ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ನಮ್ಮ ಸಮಾಜದ ಹೆಮ್ಮೆ ಎಸಿಪಿ ಶ್ರೀ ಎಸ್. ಮಹೇಶ್ ಕುಮಾರ್


Share         ಶ್ರೀ ಎಸ್. ಮಹೇಶ್ ಕುಮಾರ್ ಅವರು ಕಳೆದ 25 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿ “ಜನಸ್ನೇಹಿ ಪೊಲೀಸ್” ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವುದು ಅವರ ಕರ್ತವ್ಯನಿಷ್ಠೆ ಮತ್ತು ಮಾನವೀಯತೆಯ ಪ್ರತೀಕವಾಗಿದೆ. 2012ರಲ್ಲಿ


Read More »

10ನೇ ಅಖಿಲ ಭಾರತ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಶೃಂಗಸಭೆಯಲ್ಲಿ ಭಾರತ್ ಬ್ಯಾಂಕಿಗೆ ಪ್ರತಿಷ್ಠಿತ ಲೀಡಿಂಗ್ ಬ್ಯಾಂಕ್ ಅವಾರ್ಡ್.


Share         ಪುಣೆಯ ಕೊರೆಗಾಂವ್ ಪಾರ್ಕ್‌ನ ಹೋಟೆಲ್ ವೆಸ್ಟಿನ್‌ನಲ್ಲಿ ನಡೆದ 10ನೇ ಅಖಿಲ ಭಾರತ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಶೃಂಗಸಭೆಯಲ್ಲಿ ಭಾರತ್ ಬ್ಯಾಂಕಿಗೆ ಪ್ರತಿಷ್ಠಿತ “ಲೀಡಿಂಗ್ ಬ್ಯಾಂಕ್ ಅವಾರ್ಡ್” (Leading Bank Award) ನೀಡಿ ಗೌರವಿಸಲಾಯಿತು.


Read More »

ಕುದ್ರೋಳಿ ಗೋಕರ್ಣ ಕ್ಷೇತ್ರ ಅಭಿವೃದ್ಧಿ ರೂವಾರಿ ಬಿ. ಜನಾರ್ದನ ಪೂಜಾರಿ ಅವರ ಉಪಸ್ಥಿತಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪದ್ಮರಾಜ್ ಆರ್. ಸ್ಪಷ್ಟನೆ


Share         ಮಂಗಳೂರು: ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ನಿರ್ವಹಣೆಗೆ ಪ್ರಸ್ತುತ ಇರುವ ಸಮಿತಿಯ ಹೊರತಾಗಿ ಯಾವುದೇ ಹೊಸ ಸಮಿತಿ ರಚನೆಯಾಗಿಲ್ಲ ಎಂದು ಸಮಿತಿಯ ಕೋಶಾಧಿಕಾರಿ ಪದ್ಮರಾಜ್ ಆರ್. ಶನಿವಾರ ಇಲ್ಲಿ ತಿಳಿಸಿದರು. ಕ್ಷೇತ್ರದ ಅಭಿವೃದ್ಧಿ


Read More »

ಶೈಕ್ಷಣಿಕ ಸಾಧನೆಯಲ್ಲೂ ‘ಸೇಮ್ ಟು ಸೇಮ್’: ಕುಂದಾಪುರದ ಅವಳಿ ಸಹೋದರಿಯರ SSLC ಪವಾಡ!


Share         ​ಕುಂದಾಪುರ: ಅವಳಿ ಜವಳಿ ಮಕ್ಕಳು ಅಂದಮೇಲೆ ಅವರ ರೂಪ, ಬಣ್ಣ, ನಡವಳಿಕೆ ಹಾಗೂ ಆಲೋಚನೆಗಳಲ್ಲಿ ಸಾಮ್ಯತೆ ಇರುವುದು ಸಹಜ ಸಂಗತಿ. ಆದರೆ, ಕುಂದಾಪುರದ ಈ ಇಬ್ಬರು ಸಹೋದರಿಯರು ಶೈಕ್ಷಣಿಕ ಸಾಧನೆಯಲ್ಲೂ ತಾವು ಸಂಪೂರ್ಣವಾಗಿ


Read More »