08/08/2026

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಸಾಮೂಹಿಕ ಯೋಗಾಸನ ಸಹಿತ ಹನುಮಾನ್ ನಮಸ್ಕಾರ ಹಾಗೂ ಹನುಮಾನ್ ಚಾಲೀಸಾ ಪಠಣ ಕಾರ್ಯಕ್ರಮ

0

ಎಸ್.ಪಿ.ವೈ.ಎಸ್.ಎಸ್ ಯೋಗ ಸಮಿತಿಯ ವತಿಯಿಂದ ಭಾನುವಾರ ಯೋಗಾಸನ ಸಹಿತ ಹನುಮಾನ್ ನಮಸ್ಕಾರ ಹಾಗೂ ಹನುಮಾನ್ ಚಾಲೀಸಾ ಪಠಣ ಹಾಗೂ ಅರ್ಚನೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಶ್ರೀ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಎಸ್.ಪಿ.ವೈ.ಎಸ್.ಎಸ್ ಜಿಲ್ಲಾ ಸಂಚಾಲಕರಾದ ಅಶೋಕ್ ಕುಮಾರ್ ಜೈನ್ , ಪ್ರಾಂತ ಸಂಚಾಲಕರಾದ ರವೀಶ್ ಕುಮಾರ್ ,ವಲಯ ಸಂಚಾಲಕರಾದ ಗೋಕುಲ್ ನಾಥ್ ಶೆಣೈ, ರಮಣೆ ಶೆಟ್ಟಿ ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಬೆಳಗ್ಗೆ 4:45 ರಿಂದ 7:00 ಗಂಟೆಯವರೆಗೆ ಕಾರ್ಯಕ್ರಮ ನಡೆಯಿತು.

ಹನುಮಾನ್ ನಮಸ್ಕಾರ ಮತ್ತು ಹನುಮಾನ್ ಚಾಲಿಸ ಮಹತ್ವವನ್ನು ಕಾವೂರು ನಗರ ಸಂಚಾಲಕರಾದ ಕನಕ ಅಮೀನ್ ತಿಳಿಸಿದರು.
ಸಾವಿರಾರು ಯೋಗಪಟುಗಳು ಸಾರ್ವಜನಿಕರೊಂದಿಗೆ ಭಕ್ತಿಭಾವದಿಂದ ದೇವಾಲಯದ ಸುತ್ತಲೂ ಶಿಸ್ತುಬದ್ಧವಾಗಿ ಸಾಲಾಗಿ ಕುಳಿತು ಹನುಮಾನ್ ಚಾಲಿಸ ಪಠಿಸಿದರು.

ಪ್ರಾಂತ ಸಂಚಾಲಕರಾದ ಹರೀಶ್ ಕೋಟ್ಯಾನ್ , ಕ್ಷೇತ್ರದ ಕಾರ್ಯದರ್ಶಿ ಮಾಧವ,ವ್ಯವಸ್ಥಾಪಕ ವೀನಿತ್ ಜಿಲ್ಲಾ ಸಹಸಂಚಾಲಕರಾದ ಲಕ್ಷ್ಮೀನಾರಾಯಣ ,ಪ್ರತಾಪ್ ರಾವ್ ಜಿಲ್ಲಾ ಪ್ರಮುಖರಾದ ನಾರಾಯಣ ಶಬರಾಯ,ಚಂದ್ರಶೇಖರ, ನಗರ ಪ್ರಮುಖರಾದ ಹರೀಶ್ ಅಂಚನ್,ಆನಂದ ಕುಂಟಿನಿ, ಪ್ರಶಾಂತ್ ಈಶ್ವರ್ ಕೊಟ್ಟಾರಿ ಉಮೇಶ್,ವಸಂತ,ಪ್ರಸಾದ್ ಸಿದ್ದಕಟ್ಟೆ ಲೋಕೇಶ್ ಪೊಳಲಿ, ರೇಖಾ ,ಜಯಂತಿ ಕಟೀಲು,ಗೀತಾ ಶೆಟ್ಟಿ,ಜಯರಾಮ ಜೆಂಬುಗುಡ್ಡೆ ಪ್ರಭಾವತಿ ಭಾಗವಹಿಸಿದ್ದರು.ದಯಾನಂದ ಕಟೀಲು ಹಾಗೂ ತಂಡದವರು ಹನುಮಾನ್ ಚಾಲಿಸ ಪಠಣ ಮಾಡಿಸಿದರು. ಚೈತನ್ಯ ನಾಯಕ್ ನಿರೂಪಣೆ ಮಾಡಿದರು.

ಮಂಗಳೂರಿನ ಕದ್ರಿ,ಕಂಕನಾಡಿ, ಉಳ್ಳಾ ಲ, ಕಾವೂರು, ಸುರತ್ಕಲ್,ಪೊಳಲಿ ಮತ್ತು ಸುತ್ತಮುತ್ತಲಿನ ತಾಲೂಕು ಗಳಿಂದ ,ಬಿ.ಸಿ.ರೋಡ್, ಕಲ್ಲಡ್ಕದಿಂದ ಬಂದಿರುವ ಯೋಗಪಟುಗಳು ಭಾಗವಹಿಸಿದರು.


Leave a Reply

Your email address will not be published. Required fields are marked *

You may have missed