08/08/2026

ಕುದ್ರೋಳಿ; ತಿರಂಗಾ ಕಲಾಕೃತಿ ಶ್ಲಾಘಿಸಿದ ಜಿಲ್ಲಾಧಿಕಾರಿ ಡಾ|ರಾಜೇಂದ್ರ ಕೆ.ವಿ

0

 ಸ್ವಾತಂತ್ರ್ಯದ ಅಮೃತ ಮಹೋತ್ಸವ ನೆನಪಿನಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಪ್ರಾಂಗಣದಲ್ಲಿ 900 ಕಿಲೋ ಧವಸಧಾನ್ಯಹಾಗೂ ಪುಷ್ಪಗಳಿಂದ ರೂಪಿಸಿದ ತಿರಂಗಾ ಕಲಾಕೃತಿಯನ್ನು .. ಜಿಲ್ಲಾಧಿಕಾರಿ ಡಾ|ರಾಜೇಂದ್ರ ಕೆ.ವಿ ಅವರು ಸೋಮವಾರ ವೀಕ್ಷಿಸಿಶ್ಲಾಘಿಸಿದರು.ಸುದ್ದಿಗಾರರ ಜತೆಗೆ ಮಾತನಾಡಿದ ಜಿಲ್ಲಾಧಿಕಾರಿಯವರು, ‘ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿಜಿಲ್ಲೆಯಾದ್ಯಂತ ಹರ್‌ಘರ್ ತಿರಂಗ ಅಭಿಯಾನ ಯಶಸ್ವಿಯಾಗಿ ಸಾಕಾರವಾಗಿದೆ. ಪೈಕಿ ಕುದ್ರೋಳಿ ಕ್ಷೇತ್ರದಲ್ಲಿ ದೇಶಾಭಿಮಾನಬಿಂಬಿಸುವ ತಿರಂಗಾ ಕಲಾಕೃತಿ ರೂಪಿಸಿರುವುದು ಶ್ಲಾಘನೀಯ ಕಾರ್ಯ. ಧವಸಧಾನ್ಯವನ್ನೇ ಬಳಸಿಕೊಂಡು ಕ್ರೀಯಾಶೀಲಮಾದರಿಯಲ್ಲಿ ತಿರಂಗ ರೂಪಿಸಿರುವುದು ಅಭಿನಂದನೀಯಎಂದರು.ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್., ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.


Leave a Reply

Your email address will not be published. Required fields are marked *

You may have missed