08/08/2026

ಬಿಲ್ಲವ ಸಮಾಜದಲ್ಲಿ ಭೀಷ್ಮರೆನಿಸಿಕೊಂಡ ಬಿಲ್ಲವರ ಮಹಾಚೇತನ ಶ್ರೀ ಜಯ ಸಿ. ಸುವರ್ಣ ನಿಧನ

0

 ಬಿಲ್ಲವ ಸಮಾಜದ ಸಧಾರಣೆಯ ಹರಿಕಾರ, ನಾರಾಯಣ ಗುರುಗಳ ಸಂದೇಶದ ಪ್ರತಿಪಾದಕ ಮತ್ತು ಅನುಯಾಯಿ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಯಶಸ್ವೀ ಭಾರತ್ ಬ್ಯಾಂಕಿನ ಶಿಲ್ಪಿ, ಉದ್ಯೋಗದಾತ, ಚತುರ ಸಂಘಟಕ, ಜನಾರ್ದನ ಪೂಜಾರಿಯವರ ನಿಕಟವರ್ತಿ, ದೇಶ ವಿದೇಶಗಳಲ್ಲಿ ಎಲ್ಲಾ ಜಾತಿಯ ಸಂಘ ಸಂಸ್ಥೆಗಳಲ್ಲಿ ಉತ್ತಮ ಭಾಂದವ್ಯ ಹೊಂದಿದಂತಹ ಕೊಡುಗೈದಾನಿ, ಬಿಲ್ಲವ ಭವನ ಮುಂಬಯಿ ಮತ್ತು ಮಹಾಮಂಡಲ ಭವನ ಮುಲ್ಕಿ ಇದರ ನಿರ್ಮಾತೃ್, ಕುದ್ರೋಳಿ ಕ್ಷೇತ್ರದ ಅಭಿವೃದ್ಧಿಯ ರುವಾರಿ, ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಸ್ಥಾಪಕಾಧ್ಯಕ್ಷರು ಮತ್ತು ಈಗಿನ ಗೌರವಾಧ್ಯಕ್ಷರು ಬಿಲ್ಲವ ಸಮಾಜದಲ್ಲಿ ಭೀಷ್ಮರೆನಿಸಿಕೊಂಡ ಬಿಲ್ಲವರ ಮಹಾಚೇತನ ಶ್ರೀ ಜಯ ಸಿ. ಸುವರ್ಣ ಇವರು

ತಾ:21/10/2020ರ ಮುಜಾನೆ  ಸುಮಾರು 3.00 ಗಂಟೆಗೆ ದೇವರ ಪಾದ ಸೇರಿದರು ಎಂದು ತಿಳಿಸಲು ಬಹಳ ದುಃಖವಾಗುತ್ತಿದೆ….
ಮೃತರ ದಿವ್ಯಾತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲಿ ಹಾಗೂ ಮೃತರ ಕುಟುಂಬ ವರ್ಗ ಹಾಗೂ ಅಪಾರ ಅಭಿಮಾನಿ ವರ್ಗಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನು ದೇವರು ಅನುಗ್ರಹಿಸಲಿ.. ಎಂಬುದಾಗಿ
ಡಾ.ರಾಜಶೇಖರ ಕೋಟ್ಯಾನ್ ಅಧ್ಯಕ್ಷರು, ಚಂದ್ರಶೇಖರ ಸುವರ್ಣ ಹಾಗೂ ಪಿತಾಂಬರ ಹೆರಾಜೆ ಉಪಾಧ್ಯಕ್ಷರು, ವಿಜಯ ಕುಮಾರ್ ಕುಬೆವೂರು ಗೌರವ ಪ್ರಧಾನ ಕಾರ್ಯದರ್ಶಿ, ಗಂಗಾಧರ ಪೂಜಾರಿ ಹಾಗೂ ಗಣೇಶ್ ಎಲ್ ಪೂಜಾರಿ ಜೊತೆ ಕಾರ್ಯದರ್ಶಿ, ಯೋಗೀಶ್ ಕೋಟ್ಯಾನ್ ಕೋಶಾಧಿಕಾರಿ, ಶಿವಾಜಿ ಸುವರ್ಣ ಜೊತೆ ಕೋಶಾಧಿಕಾರಿ, ಮೋಹನ್ ದಾಸ್ ಪಾವೂರು ಸಲಹೆಗಾರರು ಮತ್ತು ಸರ್ವ ಸದಸ್ಯರ ಪ್ರಾರ್ಥನೆ…

ರಾಷ್ಟ್ರೀಯ ಬಿಲ್ಲವರ ಮಹಾಮಂಡಲ (ರಿ.) ಮುಲ್ಕಿ


Leave a Reply

Your email address will not be published. Required fields are marked *

You may have missed