08/08/2026

ಶ್ರೀ ಕ್ಷೇತ್ರ ಗೆಜ್ಜೆಗಿರಿ ಮತ್ತೆ ತೆರೆದುಕೊಂಡಿದೆ ಭಕ್ತರ ಆಗಮನಕ್ಕಾಗಿ

0

ಕೊರೊನಾ ಸಂಕಷ್ಟದ ನಡುವೆ ಸಾಮೂಹಿಕ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಒಂದು ತಿಂಗಳ ಕಾಲ ಭಕ್ತರ ಪ್ರವೇಶಕ್ಕೆ ನಿರ್ಬಂಧ ಅಳವಡಿಸಲಾಗಿದ್ದ ಪರಮ‌ ಪಾವನ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್ ಲ್ ಈಗ ಮತ್ತೆ ಭಕ್ತರಿಗಾಗಿ ತೆರೆದುಕೊಂಡಿದೆ. ಆಗಸ್ಟ್ ಒಂದರಿಂದ ಕ್ಷೇತ್ರವನ್ನು ಭಕ್ತರ ಪ್ರವೇಶಕ್ಕೆ ಮುಕ್ತಗೊಳಿಸಲಾಗಿದೆ.ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಕಾರಣಿಕ ಶಕ್ತಿಗಳ ದರ್ಶನ ಪಡೆದುಕೊಂಡು, ಪ್ರಸಾದ ಸ್ವೀಕರಿಸಬಹುದಾಗಿದೆ.

ಸಾಮಾಜಿಕ‌ ಅಂತರ ಕಾಪಾಡಲು, ಸ್ಯಾನಿಟೈಸಿಂಗ್ ಮಾಡಲು ವ್ಯವಸ್ಥೆ ಮಾಡಲಾಗಿದ್ದು, ಥರ್ಮಲ್ ಸ್ಕ್ರೀನಿಂಗ್ ಕೂಡ ಮಾಡಲಾಗುತ್ತಿದೆ.
ಭಕ್ತರ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗುತ್ತಿದೆ.‌

ಊರ, ಪರವೂರ ಭಕ್ತರು ಶ್ರೀ ಕ್ಷೇತ್ರ ಗೆಜ್ಜೆಗಿರಿಗೆ ಆಗಮಿಸಿ ಕಾರಣಿಕ ಶಕ್ತಿಗಳ ದರ್ಶನ ಪಡೆದುಕೊಂಡು ಕೃತಾರ್ಥರಾಗಬೇಕಾಗಿ ವಿನಂತಿ.

– ಶ್ರೀ ಶ್ರೀಧರ ಪೂಜಾರಿ, ಯಜಮಾನರು.

– ಶ್ರೀ ಜಯಂತ ನಡುಬೈಲ್, ಅಧ್ಯಕ್ಷರು, ಕ್ಷೇತ್ರಾಡಳಿತ ಸಮಿತಿ.

– ಶ್ರೀ ಪೀತಾಂಬರ ಹೇರಾಜೆ, ಅದ್ಯಕ್ಷರು, ಬ್ರಹ್ಮಕಲಶೋತ್ದವ ಸಮಿತಿ.


Leave a Reply

Your email address will not be published. Required fields are marked *

You may have missed