08/08/2026

ಯುವಕರ ಐಕಾನ್ ಪದ್ಮರಾಜ್ ಬಗ್ಗೆ ಕಾಂಗ್ರೆಸ್ ಒಲವು ವಿಧಾನ ಸಭಾ ಟಿಕೆಟ್ ಗ್ಯಾರಂಟಿ,

0

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕರಾವಳಿಯಲ್ಲಿ ಗೆದ್ದೇ ಗೆಲ್ಲಬೇಕು ಎನ್ನುವ  ಚಾಣಕ್ಯ ರಾಜಕೀಯ ಹೆಜ್ಜೆ ಇಡುತ್ತಿರುವಕಾಂಗ್ರೆಸ್,  ಹೈಕಮಾಂಡ್  ಜಾತಿ ಧರ್ಮದ ಭೇದವಿಲ್ಲದೆ ಎಲ್ಲರನ್ನೂ ನಗುಮುಖದಿಂದಲೇ ಮಾತನಾಡಿಸುತ್ತ ಸಮಸ್ಯೆ ಆಲಿಸುವಸರಳ ಸಜ್ಜನಿಕೆಯ ಗುಣ ಹೊಂದಿರುವ ನೇರ ನಡೆನುಡಿಯ ಧೀಮಂತ ವ್ಯಕ್ತಿತ್ವದ ಪದ್ಮರಾಜ್ ಆರ್ ಬಗ್ಗೆ ವಿಶೇಷ ಒಲವುವ್ಯಕ್ತಪಡಿಸಿದೆ ಎಂದು ತಿಳಿದು ಬಂದಿದೆ.

ಬ್ರಹ್ಮ ಶ್ರೀ ನಾರಾಯಣ ಗುರುಗಳ ತತ್ವಾದರ್ಶಗಳ ನೆಲೆಯಲ್ಲಿ ಸಮಾಜ ಸೇವೆಯಲ್ಲಿ  ಮೈಗೂಡಿಸಿಕೊಂಡು, ಅಪಾರ ಶ್ರದ್ಧೆ, ಭಕ್ತಿಯಿಂದ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಬಹು ದೊಡ್ಡ ಜವಾಬ್ದಾರಿಯನ್ನು  ಕಿರಿಯ ವಯಸ್ಸಿನಲ್ಲಿ ವಹಿಸಿಕೊಂಡು25 ವರ್ಷಗಳಿಂದ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿಯಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಇವರು ಕ್ಷೇತ್ರದ ಅಭಿವೃದ್ಧಿಯರುವಾರಿ ಜನಾರ್ದನ ಪೂಜಾರಿಯವರ ಅಪ್ಪಟ ಅನುಯಾಯಿಯಾಗಿ ದೇವಸ್ಥಾನಗಳು ಧಾರ್ಮಿಕತೆಯ ಜತೆ ಸಮಾಜಮುಖಿಚಟುವಟಿಕೆಗಳಲ್ಲಿ ಕೂಡ ಮುಂದೆ ಬರಬೇಕೆಂದು ತೋರಿಸಿಕೊಟ್ಟವರು.

1995 ರಿಂದ ಕಾನೂನು ವೃತ್ತಿಯ ಚೊಚ್ಚಲ ಅಭ್ಯಾಸವನ್ನು ಕೇಂದ್ರದ ಮಾಜಿ ವಿತ್ತ ಸಚಿವ ಜನಾರ್ದನ ಪೂಜಾರಿಯವರೊಂದಿಗೆಪ್ರಾರಂಭಿಸಿ 4 ವರ್ಷಗಳ ಬಳಿಕ ಸ್ವಂತ ಕಚೇರಿಯನ್ನು ಪ್ರಾರಂಭಿಸಿದರು. ಶುದ್ಧಹಸ್ತದ ರಾಜಕಾರಣಿ ಬಿ.ಜನಾರ್ದನ ಪೂಜಾರಿಯವರಎಲ್ಲ ಚುನಾವಣೆಗಳಲ್ಲಿ ಅವರೊಂದಿಗೆ ದುಡಿದಿರುವ ಇವರು ಜಾತ್ಯತೀತ ಮನೋಭಾವ, ಸರ್ವರಿಗೂ ಸಮಪಾಲು, ಸರ್ವರಿಗೂಸಮಬಾಳು ಎನ್ನುವ ತತ್ವ ಸಿದ್ಧಾಂತದ ಬಗ್ಗೆ ಒಲವು ಹೊಂದಿರುವವರು.

ಕರೊನಾ ಮಹಾಮಾರಿಯ ಸಂದರ್ಭ ಬಡವರ, ನಿರಾಶ್ರಿತರ, ಕೂಲಿಕಾರ್ಮಿಕರ ಸಹಾಯಕ್ಕೆಸ್ವತಃ ಮುಂದೆ ನಿಂತು ಕೆಲಸ ಮಾಡಿದ್ದು, ಗುರುಬೆಳದಿಂಗಳು ಸಂಸ್ಥೆಯ ಮೂಲಕ ಜನಾರ್ದನ ಪೂಜಾರಿಯವರ ಮಾರ್ಗದರ್ಶನ, ದಿ. ಜಯಸುವರ್ಣರ ಆಶೋತ್ತರಗಳಸ್ಫೂರ್ತಿಯ ನೆಲೆಯಲ್ಲಿ ಹಿರಿಯರ ಜತೆ ಕ್ರಿಯಾಶೀಲ ಯುವಕರ ತಂಡ ಕಟ್ಟಿಕೊಂಡು ಕೆಲಸ ಮಾಡುತ್ತಿರುವುದು ಪದ್ಮರಾಜ್ ವರ್ಚಸ್ಸನ್ನು ಇನ್ನಷ್ಟು ಹೆಚ್ಚಿಸಿತು.

ಗಣರಾಜ್ಯೋತ್ಸವದ ಪೆರೇಡ್‌ನಲ್ಲಿ ಶ್ರೀ ನಾರಾಯಣಗುರುಗಳ ಟ್ಯಾಬ್ಲೋ ನಿರಾಕರಣೆ ಸಂದರ್ಭ ಮುಂಚೂಣಿಯಲ್ಲಿ ನಿಂತುಹೋರಾಟ, 10ನೇ ತರಗತಿಯಲ್ಲಿ ಸಮಾಜ ವಿಜ್ಞಾನ ಪಠ್ಯ ಕೈಬಿಟ್ಟದರ ವಿರುದ್ಧ ಮೊದಲು ಖಂಡನೆ ವ್ಯಕ್ತಪಡಿಸಿ ಹೋರಾಟಸಂಘಟಿಸಿದ್ದು, ಸಮಾಜದ ಎಲ್ಲ ವರ್ಗದ ಜನರನ್ನು ಸಮಾನವಾಗಿ ಗೌರವಿಸುತ್ತ ಎಲ್ಲ ವರ್ಗದ ಜನರಿಂದ ಪ್ರೀತಿ ವಿಶ್ವಾಸ ಗಳಿಸಿದ್ದು. ಮೊದಲಾದ ಅಂಶಗಳ ಜತೆ ಪದ್ಮರಾಜ್‌ರವರಿಗೆ ವಿಧಾನಸಭಾ ಟಿಕೆಟ್ ನೀಡಿದರೆ ಅವರ ವರ್ಚಸ್ಸು ಎಲ್ಲಾ ವಿಭಾಗದಜನಸಮುದಾಯ ವನ್ನು ಆಕರ್ಷಿಸುವ ಜತೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಕಾಂಗ್ರೆಸ್ ಗೆ ಹೆಚ್ಚಿನ ಸೀಟ್ ಗೆಲ್ಲಲುಸಹಾಯವಾಗುತ್ತದೆ ಎನ್ನುವ ಹಲವಾರು ಸಮೀಕ್ಷೆ ವರದಿಗಳು ಪದ್ಮರಾಜ್ ಆರ್‌ಗೆ ಸೀಟ್ ಗ್ಯಾರಂಟಿಯಾಗಲು ಪಕ್ಕಾ ಕಾರಣ ಎಂದುತಿಳಿದು ಬಂದಿದೆ. ಇವರಿಗೆ ಟಿಕೆಟ್ ನೀಡಿದರೆ ಕರಾವಳಿಯ ರಾಜಕೀಯದಲ್ಲಿ ಮಹತ್ವದ ತಿರುವು ಕಾಣಲಿದೆ ಎನ್ನುವ ಅಂಶವೂಬಹಿರಂಗವಾಗಿದೆ.


Leave a Reply

Your email address will not be published. Required fields are marked *

You may have missed